Sunday, February 26, 2012

ಇದು ಯಾರು ಬರೆದ ಕಥೆಯೋ ?

"ಪೂಜಾಕಾಲೆ ಸ್ವರ ವರ್ಣ ಮಂತ್ರ ತಂತ್ರ ದೋಷ ಪರಿಹಾರರ್ಥಂ ಪ್ರಾಯಶ್ಚಿತ್ತಾರ್ತಂ ಕರಿಷ್ಯೇ" ಅಂತ ದೇವರ ಮೇಲೆ ಒಂದು ಹೂವು ಹಾಕಿ ಆಚಮನ ಮಾಡಿ ಎದ್ದರು ರಾಂಭಟ್ರು.. ಗಂಭೀರ ವದನ, ಸುಮಾರು ೩೨ ವರ್ಷದ ಧೃಢಕಾಯದವರು, ಸುಬ್ಬಣ್ಣನ ಮನೆಯ ಸತ್ಯನಾರಾಯಣ ಪೂಜೆಗೆ ಹೊರಡಲು ತಯಾರಾದರು..
"ಅಬ್ಬೆ ಆಸ್ರಿಗೆ ಆತನೇ, ಎಂತ ಮಾಡಿದ್ಯೇ? "
" ಆತೋ ಮಾರೆಯ ಆತು.. ಅವತ್ತು ಸತ್ಯನಾರಾಯಣ ಪೂಜೆ ಅಲ್ದಾ, ಅವಲಕ್ಕಿ ಮಜ್ಜಿಗೆ ತಿನ್ಡ್ಕಂಡು ಹೋಗು.. ಮುಸುರೆ ಎಂತದೂ ಮಾಡಿದ್ನಿಲ್ಲೇ, ಯಾವಾಗೂ ನಾನೇ ಮಾಡಿ ಸಾಯವು.. ನನ್ನ ಹಣೆಬಾರನೆ ಇದು ಆಗೋತು " ಸ್ವಲ್ಪ ಜೋರಾಗೆ ಹೇಳಿದರು ತಾಯಿ. ಯಾಕೋ ಅಬ್ಬೆಗೆ ಸ್ವಲ್ಪ ಸಿಟ್ಟು ಬಂದಾಗೆ ಇದ್ದು ಹೇಳಿ ರಾಂ ಭಟ್ರು ಸುಮ್ಮನೆ ಸ್ವಲ್ಪ ಅವಲಕ್ಕಿ ಅದಕ್ಕೆ ಮಜ್ಜಿಗೆ ಹಾಕಿ ತಿನ್ನಲು ಅಡುಗೆ ಮನೆಗೆ ಹೋದರು..
ಅಡುಗೆ ಮನೆಯಲ್ಲಿ ಅಬ್ಬೆ ಒಬ್ಬಳೇ ಪಾತ್ರೆ ತೊಳೆಯುತ್ತಿದ್ದಳು.. ಬೆಳಕು ಸರಿಯಾಗಿ ಇರಲಿಲ್ಲ.. ಹಳೆ ಕಾಲದ ಮನೆ.. ಮುಖ ಗೋಡೆಯ ಕಡೆಗೆ ಇತ್ತು.. ಪಾಪ ಅದೇ ಕಟ್ಟೆ ಇರುವ ಜಾಗದಲ್ಲಿ ಪಾತ್ರೆ ಶಬ್ದ ಮಾಡುತ್ತಾ ಮಗನ ಬಂದಿದ್ದು ಗೊತ್ತಾದರೂ ಆ ಕಡೆ ಗಮನಿಸದಂತೆ ಏನೋ ಗೊಣಗುತ್ತಿದ್ದಳು.. ರಾಂಭಟ್ಟ ಇನ್ನೇನು ಅಲ್ಲೇ ತಗಡಿನ ಡಬ್ಬಿಯಲ್ಲಿ ಇದ್ದ ಅವಲಕ್ಕಿಯನ್ನ ಒಂದು ಪಾತ್ರೆಯಲ್ಲಿ ಹಾಕಿಕೊಂಡು ತೊಳೆದು ಕೊಳ್ಳಲು ಹೋದಾಗ ಅಬ್ಬೆಯನ್ನು ನೋಡಿ ವಿಷ್ಯ ಸ್ವಲ್ಪ ಅರ್ಥ ಆಯ್ತು..
" ಎಂತದೆ ಅಬ್ಬೆ ಅದು ದಿನಾ ಕರ್ಖರೆ ನಿಂದು, ನಾ ಎಂತ ಮಾಡವೆ ಈಗ, ಅಪ್ಪ ಮೊದಲಿಗೆ ನನ್ನ ಹಾಯ್ ಸ್ಕೂಲ್ ಮುಗಿದ ಮೇಲೆ ಕಾಲೇಜ್ ಗೆ ಕಳ್ಸಿದ್ರೆ ನಾನು ಏನೋ ಅಲ್ಪ ಸ್ವಲ್ಪ ಓದಿ ಒಳ್ಳೆ ಕೆಲ್ಸಕ್ಕೆ ಸೇರ್ಕತ್ತಿದ್ದೆ.. "
"ಹೌದ, ಆಗ ನಮ್ಮ ಪರಿಸ್ತಿತಿ ಹಂಗೆ ಇತ್ತು.. ಆ ಸುಬ್ಬಣ್ಣ ನಿಂಗೆ ಮಂತ್ರ ಹೇಳೇ ಕೊಟ್ಟದ್ದಕ್ಕೆ ನಿನ್ನ ಜೀವನಕ್ಕೆ ಒಂದು ಹಾದಿ ಆತು.. ಏನೋ ಸಣ್ಣ ತೋಟ ನೋಡ್ಕಂಡು ಇದ್ದೆ.  ಎಂಟು ದಿನ ಹೇಳಿ ಹಿಂಗೆ ಇರತ್ಯ? "
" ನಾನಾದರೂ ಎಂತ ಮಾಡುದೇ.?"
"ತಮ್ಮ ಹಂಗಾರೆ ಆ ಸುಬ್ಬಣ್ಣ ೪ ಜಾತಕ ಕಳ್ಸಿದ್ದ.. ಒಂದು ಜಾತಕ ಆಗ್ತು ಹೇಳಿದ್ದ "
" ಒವೆಲ್ಲ ಮನೇಲಿ ಇಪ್ಪ್ರೋವ್ರನ್ನ ಮದುವೆ ಆಗ್ತ್ವಿಲ್ಯೇ.. "
"ಅಲ್ದೋ ಒಂದು ಸಲ ಹೋಗಿ ಕೇಳ್ಕಂಡು ಬಾರಾ" 
"ಇಲ್ಲಿವರೆಗೆ ಎಷ್ಟು ಆತೆ? ನಂಗೂ ಹೋಗಿ ಹೋಗಿ ಸಾಕಾಗೋತು, ಎಲ್ಲೂ  ಹೆಣ್ಣು ನೋಡು ವರೆಗೇ ಬತ್ತಿಲ್ಲೆ. ಊರಲ್ಲಿ ಅಂದ ಕೂಡ್ಲೇ ಬೇಡ ಹೇಳ್ತೋ..ಇನ್ನು ಏನೋ ನಮ್ಮ ಆಸ್ತಿ ಇದ್ದು ಅಂದ್ರೆ, ಬಟ್ರು, ಮಡಿ ಮೈಲಿಗೆ ಜಾಸ್ತಿ, ಅತ್ತೆಬೇರೆ ಇದ್ದು. ಹೇಳ್ತೋ..ನಾವು ಮಾಡುವ ಉದ್ಯೋಗನೆ ನಮಗೆ ಕಂಟಕ"
"ಅಲ್ದೋ ಮಾಣಿ ನಿಂಗೆ ಮದುವೆ ಆಗವು ಅಂದ್ರೆ ನಾ ಇದ್ದದ್ದು ತಪ್ಪನ..? ಅವೆಲ್ಲ ಹಾಂಗೆ ಉದ್ಭವ ಅದವ? "
" ಎಲ್ಲ ಹಂಗೆಯೇ ಅಬ್ಬೆ ,, ನಮ್ಮಲ್ಲಿ ಗಂಡು ಮಕ್ಕೋ ಜಾಸ್ತಿ ಇದ್ದೋ.. ಹಣ್ಣು ಮಕ್ಕೋ ಕಡಿಮೆ ಆಜೋ.. ಎಲ್ಲರಿಗೂ ಸುಖದ ಜೀವನ ಬೇಕು ನೋಡು..ಮೈ ಬಗ್ಗಿಸಿ ದುಡಿಯುಲೇ ಆಗ್ತಿಲ್ಲೆ, ಅತ್ತೆ ಮಾವನ ಕಾಟ ಇಪ್ಪುಲೇ ಇಲ್ಲೇ.. ಅಲ್ದೆ, ಪಿ ಯು ಸಿ ಮಾಡಿದ ಹುಡ್ಗಿರು, ಇಂಜಿನಿಯರ್ ಆದೊವೆ ಬೇಕು ಹೇಳ್ತಾ.. ಅಂದ್ರೆ ನೀನೆ ಯೆಚನೆ ಮಾಡೇ.. ಇನ್ನು ನಮ್ಮಂತ ಭಟ್ಟನ ಯಾರು ಮದುವೆ ಆಗ್ತ್ವೆ? ಈಗೆಲ್ಲ ಬೇರೆ ವಿದೇಶದಲ್ಲಿ ಇದ್ದವೆ ಬೇಕು ಹೇಳುಲೇ ಶುರು ಮಾಡಿದ್ದೋ.. "
" ತಮ್ಮ ಹಂಗಾರೆ ಯಾವಾಗೋ ನೀನು  ಸಂಸಾರ ಹೇಳಿ ಮಾಡುದು..? ನಾ ಮೊಮ್ಮಕ್ಕಳನ್ನ ಅಡಸುದು..?"
" ಆ ಭಗವಂತ ಎಲ್ಲಿ ಹೆಂಡತಿ ಸೃಷ್ಟಿ ಮಾಡಿದನೋ ಗುತ್ತಿಲ್ಲೇ.. ಈಗೆಲ್ಲ ನಮ್ಮ ಜಾತಿ ಹೇಳಿ ಕುತ್ಕಂದ್ರೆ ಆಗ್ತಿಲ್ಲೆ..ಮೊನ್ನೆ ಆ ಕುಪ್ಪಣ್ಣ ಅದ್ಯಾವುದೋ ಲಿಂಗಾಯಿತ ಹುಡುಗಿ ತಂದಕಂಡು ಮದುವೆ ಆಜ್ನಿಲ್ಯ?
"ಹೌದು ನಂಗೂ ಗುತ್ತಾತು, ಶುಶೀಲ ಹೇಳ್ತಿತ್ತು..ಎಂತ ಅವನೇ ದುಡ್ಡು ಕೊಟ್ಟಿದ್ನದ..ಹೌದನ? "
"ಆದಿಕ್ಕು..ಮತ್ತೆ ಎಂತ ಮಾಡ್ತವೆ..? ಹುಡುಗಿ ನೋಡುಲೆ ಬ್ರಾಹ್ಮಣರ ಜಾತಿ ತರಹನೂ ಕಾಂತಿಲ್ಯೇ..ಗಂಡಿಗೆ ಒಂದು ಹೆಣ್ಣು ಅಷ್ಟೇ.."
"ಎಂತ ಕಾಲ ಬಂತೋ ಮಾರೆಯ"
"ಎಂತದೂ ಇಲ್ಲೇ ನಾನೂ ಇನ್ನು ೪ ಕಡೆ ನೋಡ್ತೆ ಕಡೆಗೆ ನಮಗೂ ಅದೇ ಗತಿ.."
"ನೋಡವನ ತಮ್ಮ ದೇವರಿದ್ದ.. ನೀ ಅವಲಕ್ಕಿ ಮಜ್ಜಿಗೆ ತಿನ್ಡ್ಕಂಡು ಹೊರಡು.. ಎಂತ ಮಾಡುಲೂ ಬತ್ತಿಲೆ.. ಹರೇ ರಾಮ ಹರೆ ರಾಮ, ಎಲ್ಲ ನೀನೆ ದಾರಿ ತೋರ್ಸವು.."

ಇದು ಬರಿ ರಾಮ್ ಭಟ್ಟರ ಕಥೆಯಲ್ಲ.. ಈಗಿನ ಕಾಲದ ಹವ್ಯಕರ ಮನೆಯಲ್ಲಿ ನಡೆಯುವ ನಿತ್ಯ ಕಥೆ.. ಇದಕ್ಕೆ ಪರಿಹಾರ ಏನು?

Friday, February 17, 2012

ಆ ಎರಡು ಹೆಜ್ಜೆಗಳು

ಸೋಮೆರು ಎಂಬ ಒಬ್ಬ ರೈತನಿದ್ದ.. ಆತ ದೈವಭಕ್ತನಾಗಿದ್ದ.. ತನ್ನ ಪ್ರತಿಯೊಂದು ಕೆಲಸದಲ್ಲೂ  ದೇವರನ್ನ ಕಾಣುತ್ತಿದ್ದ.. ಹೆಂಡತಿ ಮಕ್ಕಳೊಂದಿಗೆ ವ್ಯವಸಾಯದಲ್ಲಿ ತೊಡಗಿದ್ದ..
ಪ್ರತಿನಿತ್ಯ ಬೆಳಿಗ್ಗೆ ನದಿಯಲ್ಲಿ ಸ್ನಾನಮಾಡಿ ಅಲ್ಲೇ ಮರಳಿನಲ್ಲಿ ಇಷ್ಟ ದೇವರನ್ನ ಮಾಡಿ   ಪೂಜಿಸುತ್ತಿದ್ದ. ಇದು ತುಂಬಾ ವರ್ಷದಿಂದ ನಡೆಸಿಕೊಂಡು ಬಂದಿದ್ದ.. ಇತ್ತೀಚಿಗೆ ಪೂಜೆ ಮುಗಿಸಿ ಮನೆಗೆ ಹೊರಡುವಾಗ, ಅಕಸ್ಮಾತ್ತಾಗಿ ಹಿಂದೆ ನೋಡಿದ.. ಅಲ್ಲೊಂದು ಆಶ್ಚರ್ಯ ಕಾದಿತ್ತು.. ಈತನ ಹೆಜ್ಜೆ ಜೊತೆ ಇನ್ನೆರಡು ಹೆಜ್ಜೆಗಳು ಕಂಡವು.. ಸೋಮೆರುಗೆ ಇದು ಯಾರ  ಹೆಜ್ಜೆ ಅಂತ  ಅರ್ಥವಾಗಲಿಲ್ಲ.. ಅದೇ ಯೋಚನೆಯಲ್ಲೇ ಮನೆಗೆ ಬಂದು ಒಂದು ಮರದ ಕೆಳಗೆ ಕುಳಿತ.. ಹಾಗೆಯೇ ಗಾಢ ನಿದ್ರೆ ಬಂತು.. ನಿತ್ಯ ಪೂಜೆ ಮಾಡುತ್ತಿದ್ದ ಇಷ್ಟ ದೇವರು ಕಾಣಿಸಿಕೊಂಡ ..ಆಗ ಸೇಮೆರು ಈವತ್ತು ನೋಡಿದ ಆಶ್ಚರ್ಯ ಹೇಳಿದ.. ಆದಕ್ಕೆ " ಕಂದ, ನೀನು ನೋಡಿ ಇನ್ನೆರಡು ಹೆಜ್ಜೆಗಳು ನನ್ನವೇ, ನಾನು ಯಾವಾಗಲೂ ನಿನ್ನ  ಜೊತೆಗಿರುತ್ತೇನೆ."  ಅಂದ  . ಸುಮೆರುಗೆ ಅತ್ಯಂತ ಸಂತೋಷವೂ ಸಮಾಧಾನವೂ ಆಯಿತು. 
ಸ್ವಲ್ಪ ಸಮಯದ ನಂತರ ಹೆಂಡತಿ ಮಕ್ಕಳಿಗೆ ಯಾವುದೋ ಒಂದು ಖಾಯಿಲೆ ಬಂದು ಸುಮೆರುವಿನ ಸ್ತಿತಿ ಚಿಂತಾಜನಕವಾಯಿತು .. ಪ್ರತಿನಿತ್ಯ ದೇವರನ್ನ ಬೇಡಿಕೊಳ್ಳಲಾರಮ್ಭಿಸಿದ .. ಆಗ ಅವನಿಗೆ ದೇವರ ಮೇಲೆ ಅನುಮಾನ ಶುರುವಾಯ್ತು.. ಯಾಕೆ ದೇವರು ನನ್ನನ್ನ ನೋಡುತ್ತ್ತಿಲ್ಲ ಅನ್ನಿಸತೊಡಗಿತು.. ಹಾಗೆ ಮನೆಗೆ ಬರುವಾಗ ಹಿಂದೆ ದೇವರ ಹೆಜ್ಜೆ ಇದೆಯೇ ಅಂತ ಗಮನಿಸಿದ.. ಬರಿ ಇವನ ಹೆಜ್ಜೆ ಮಾತ್ರ ಕಾಣಿಸತೊಡಗಿತು.. ದೇವರ ಮೇಲೆ ಅತೀವ ಸಿಟ್ಟು ಬಂತು. "ನಾನು ನಿನ್ನನ್ನೇ ನಂಬಿದ್ದೇನೆ, ಆಗ ಸುಖವಾಗಿದ್ದೆ,  ಆಗ ನೀನು ನನ್ನ ಜೊತೆಗಿದ್ದೆ, ಈಗ ಕಷ್ಟದಲ್ಲಿರುವಾಗ ಎಲ್ಲಿಗೆ ಹೋದೆ..? ಇದು ನ್ಯಾಯನ " ಅಂತ ಗೋಗರೆಯತೊಡಗಿದ.. ಹಾಗೆ ಬಂದು ಮರದಕೆಳಗೆ ಕುಳಿತ.. ಗಾಢ ನಿದ್ರೆ.. ಆಗ ದೇವರು ಕಾಣಿಸಿಕೊಂಡ .. "ಏನು ಸ್ವಾಮಿ ಇದು ಸರಿನ..? ನಿನ್ನ ಹೆಜ್ಜೆಗಳೇ ಕಾಣಿಸುತ್ತಿಲ್ಲ.. ಈಗ ನಾನು ಕಷ್ಟದಲ್ಲಿದ್ದೇನೆ.. ನೀನು ಹೀಗೆ ನನ್ನನ್ನ ಮರೆಯಬಹುದ? " ಆಗ ದೇವರು " ಕಂದ, ಸಿಟ್ಟಾಗಬೇಡ, ಈಗ ನೀನು ನೋಡುತ್ತಿರುವ ಹೆಜ್ಜೆಗಳು ನಿನ್ನದಲ್ಲ, ಅವು ನನ್ನವೇ, ನಿನಗಿರುವ ಕಷ್ಟದಲ್ಲಿ ನೀನು ನಡೆಯಲೂ ಅಸಾಧ್ಯ ಅಂತ ನಿನ್ನನ್ನ ನನ್ನ ಹೆಗಲಮೇಲೆ ಹೊತ್ತುಕೊಂಡಿದ್ದೇನೆ. ಕಷ್ಟ ಯಾವಾಗಲೂ ಶಾಶ್ವತ ಅಲ್ಲ ಮಗು, ಕಳೆದ ಮೇಲೆ ಪುನಃ ಮೊದಲಿನಂತೆ ನಾನು ನಿನ್ನ ಜೊತೆಗಿರುತ್ತೇನೆ"
ಸುಮೆರುವಿಗೆ ಏನು ಹೇಳಬೋಕೋ ತಿಳಿಯಲಿಲ್ಲ..
 

Monday, February 13, 2012

ಭಾಗ್ಯದ ಲಕ್ಷ್ಮಿ ಬಾರಮ್ಮ

"ಭಾಗ್ಯದ  ಲಕ್ಷ್ಮಿ ಬಾರಮ್ಮ, ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ...." 

ಹೀಗೆ ಗೀತೆ ರಚಿಸಿ, ಹಾಡಿದರು ಪುರಂದರ ದಾಸರು . ಅದನ್ನ ನಮ್ಮ ಭಾರತರತ್ನ ಪಂಡಿತ್ ಭೀಮಸೇನ್ ಜೋಷಿ ಯವರ ಕಂಚಿನ ಕಂಠದಲ್ಲಿ ಜನ ಮನ ಮುಟ್ಟುವಂತೆ ಮನೋಜ್ಞವಾಗಿ ಹಾಡಿದರು..   
ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸೌಭಾಗ್ಯ ಲಕ್ಷ್ಮಿ , ಸಂತಾನ ಲಕ್ಷ್ಮಿ, ಹೀಗೆ ಹಲವಾರು ವಿಧದಿಂದ ನಾ ಆ ಲಕ್ಷ್ಮಿ ದೇವಿಯನ್ನ ಹಾಡಿ ಹೊಗಳುತ್ತಿದ್ದೇವೆ... ಹೇಗಾದರೂ ಮಾಡಿ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುವ  ಬಯಕೆಯಿಂದ ಮಾಡಬಾರದ ಕೆಲಸಕ್ಕೂ  ಕೈ ಹಾಕುತ್ತಾರೆ.. ಅದು ನ್ಯಾಯಸಂಮ್ಮತವೋ ಅಂತಲೂ ಯೋಚಿಸುವ ಗೋಜಿಗೆ ಹೋಗುವುದಿಲ್ಲ..ಅದೇನೇ ಇರಲಿ..ಬೇಡಿದವರಿಗೆ ಅಥವಾ ಪೂಜಿಸಿದವರಿಗೆ ಮಾತ್ರ ಆಕೆ ಧನ, ಕನಕ ಕರುಣಿಸುವುದಾದರೆ ಆಕೆ ಅವ್ರ ದಾಸಿಯಗಿರುತ್ತಿದ್ದಳೇನೋ..!  ಪೂಜಿಸದವರು ಉಪವಾಸ ಇರಬೇಕಾಗುತ್ತಿತ್ತೇನೋ..! ಮಾತೆಯ ದೃಷ್ಟಿಯಲ್ಲಿ  ಎಲ್ಲ ಮಕ್ಕಳೂ ಒಂದೇ.. ಎಲ್ಲರೂ ಸಮಾನರು.. 
ಎಂದಿನಂತೆ ಅಂದೂ ಕೂಡ ಬೆಳಿಗ್ಗೆ ಎದ್ದು "ಕರಾಗ್ರೆ ವಸತೇ ಲಕ್ಸ್ಮಿಕರಮಧ್ಯೇ ಸರಸ್ವತಿ ಕರಮೂಲೇ ಸ್ಥಿತೇ ಗೌರಿ ಪ್ರಭಾತೆ ಕರ ದರ್ಶನಂ" ಅಂತ ದೇವಿ ಸ್ತುತಿ ಮಾಡಿ " ಏನ್ ರಗೆಲೆ ಮಗಳಿಂದು  ಅಂತ ಗೊಣಗುತ್ತ  ನಿತ್ಯ ಕರ್ಮಗಳನ್ನ ಮುಗಿಸಿ ವಾಕಿಂಗ್ ಗೆ ಹೊರಡಲು ಅನುವಾದೆ.. 
"ರೀ ಇಂದು ಹಾಲು ತಗೊಂಡು ಬರಲ್ವ?" ಅಂತ ನನ್ನ ಶ್ರೀಮತಿ ಕೂಗಿ ದಿನದ ಕರ್ತವ್ಯವನ್ನ ನೆನಪಿಸಿದಾಗ  "ಇವಳಿಗೆ ಇದು ಈಗಲೇ ನೆನಪಾಗಬೇಕೆ" ಅಂದುಕೊಳ್ಳುತ್ತ, ಜೋಬಲ್ಲಿ ೫೦ ರು ಹಿಡಿದು ಹೊರಟೆ.  ಅಲ್ಲಿ ಹೋಗಿ ೨ ಲಿಟರ್ ಹಾಲು ಕೊಡಿ ಅಂದಾಗ ಅವನು ಹಾಲು ಕೊಟ್ಟು ೨ ರು ವಾಪಸ್ ಕೊಟ್ಟ . "ಇದೇನಯ್ಯ, ನಿನ್ನೆ ೮ ರು ವಾಪಸ್ ಕೊಟ್ಟಿದ್ದೆ, ಇವತ್ತೆನಯ್ಯ  ? ಚಿಲ್ಲರೆ ಇಲ್ವಾ?"
"ಏನ್ ಸರ್ ಹಿಂಗೆ ಹೇಳ್ತಿರ? ಇವತ್ತಿನಿಂದ ಹಾಲು ಲಿಟರ್ ಗೆ ೩ ರು ದಾಸ್ತಿ ಆಗಿಲ್ವ? ನೀವು ಟಿ ವಿ ಲಿ ನೋಡಿಲ್ವಾ? "ಅಂತ ನನ್ನನ ಒಳ್ಳೆ ಹಳ್ಳಿ ಗಮಾರನಂತೆ ನೋಡಿದ.. 
"ಹೊವ್ದೆನಯ್ಯ ?ನಂಗೆ ಗೊತ್ತೇ ಇರಲಿಲ್ಲ.. ನಿಂದೆ ಚಾನ್ಸು ಬಿಡು ಹಾಲಿಗೆ ೩ ರು ಲಾಭ " 
"ಎಲ್ಲಿ ಲಾಭ ಸ್ವಾಮಿ, ನಮಗೆ ಬರುವ ಲಾಭ ಅಷ್ಟೇ, ಅದ್ಯೇನೋ ರೈತರಿಗೆ ಹೋಗುತ್ತಂತೆ"  
"ಹೌದ? ಒಳ್ಳೇದಪ್ಪ " ಅಂತ ೨ ಲಿಟರ್ ಹಾಲು ಹಾಕೊಂಡು ಹೊರಟೆ.. 
ಹೌದು ಇದ್ಯಾಕೆ ಇದ್ದಕ್ಕಿದ್ದ ಹಾಗೆ ಹಾಲಿನ ರೇಟು ಜಾಸ್ತಿ ಆಯ್ತು? ಹೆಂಗಪ್ಪ ಬದುಕು ಸಾಗಿಸೋದು ಅಂತ ಯೋಚಿಸುತ್ತ ಬಂದೆ.. ನಾವೇನೋ ೨೪ ರು ಕೊಟ್ಟು ಹಾಲು ತಗೊತೀವಿ,, ಆದ್ರೆ ಅದೇ ರೈತನಿಗೆ ಎಷ್ಟು ಕೊಡ್ತಾರೋ? ಅಂತ ಯೋಚಿಸುತ್ತ ಬಂದೆ..
ಒಬ್ಬ ಹಸುವನ್ನು ಕರೆದುಕೊಂಡು ಕೈಲ್ಲಿ ಒಂದು ಸ್ಟೀಲ್ ಬಕೆಟ್ ಹಿಡಿದು ಹೋಗುತ್ತಿದ್ದ.. ಸರಿ ಕೇಳೆ ಬಿಡೋಣ ಅಂತ ಅವನನ್ನ ತಡೆದೆ. 
" ಏನಪ್ಪಾ ಈ ಹಸು ತಗೊಂಡು ಎಲ್ಲಿ ಹೋಗ್ತಿದ್ದಿಯ? "
"ಇಲ್ಲೇ ಡೈರಿಗೆ ಸ್ವಾಮಿ" ಸರಿಯಾದ ವ್ಯಕ್ತಿಯೇ ಸಿಕ್ಕ ಅಂದುಕೊಂಡೆ..
"ಏನು ಹಸುವಿನ ಜೊತೆಗೆ ಹೊರಟಿದ್ದೀಯ !"
" ಹುಂ ಸ್ವಾಮಿ ಅಲ್ಲೇ ಹಾಲು ಕರೆದು ಅವರಿಗೆ ಕೊಡ್ತೀನಿ.. ಫ್ರೆಶ್ ಇರಬೇಕಲ್ಲ ಸರ್.. ನೀರು ಹಾಕ್ತಿವಿ ಅಂತ ಕಂಪ್ಲೈಂಟ್ ಮಾಡ್ತಾರೆ ಅದಕ್ಕೆ ಅಲ್ಲೇ ಕರೆದು ಕೊಡ್ತೀನಿ.."
" ಎಷ್ಟು ಕೊಡ್ತಾರೆ ಲಿಟರ್ ಗೆ?"
"ಈ ತಿಂಗಳವರೆಗೆ ೧೯ ರು ಕೊಡ್ತಾರಂತೆ.. ಮುಂದಿನ ತಿಂಗಳಿಂದ ೨೨ ಕೊಡ್ತಾರಂತೆ..ಸ್ವಲ್ಪ ಸಮಾಧಾನ.. ಹುಲ್ಲಿನ ಬೆಲೆ ಬೇರೆ ಜಾಸ್ತಿ.. ಪೆಟ್ರೋಲ್ ರೇಟು ಜಾಸ್ತಿ ಅಂತ ನಮ್ಮ ಗಾಡಿಯವ  ಜಾಸ್ತಿ ಮಾಡ್ಬಿಟ್ಟ..ಈಗ ಮುಂದಿನ ತಿಂಗಳಿಂದ ಸ್ವಲ್ಪ ಲಾಭ ಬರಬಹುದು "
ಅಂದ್ರೆ ಬರಿ ನಮಗೆ ಕೊಡುವ ಹಾಲಿಗೂ ರೈತನಿಗೆ ಸಿಗಿವ ಹಾಲಿಗೂ ಬರೀ ೨ ರು ವ್ಯತ್ಯಾಸ .!!! 
ಈ ೨ ರು ಯಿಂದ,, ರೈತ ಕೊಟ್ಟ ಹಾಲಿನ ಶೇಖರಣೆ, ಸಾಗಾಟ , ಸಂಸ್ಕರಣೆ, ಶಿತಲೀಕರಣ, packing , ಪುನಃ ಗ್ರಾಹಕರಿಗೆ ಸಾಗಾಟ , ಮತ್ತೆ ಮಾರಾಟ, ಅವರ commission , ಇವೆಲ್ಲ ಸಾಧ್ಯನ ಅನ್ನಿಸ್ತು.. ಆಮೇಲೆ ಗೊತ್ತಾಗಿದ್ದು ರೈತ ಕೊಟ್ಟ ಹಾಲಿನಿಂದ ಅನೇಕ ರಾಸಯನಿಕಗಲನ್ನ ಬಳಸಿ, ಅದರಲ್ಲಿರುವ ಕೊಬ್ಬು ಬೇರ್ಪಡಿಸಿ ನಮಗೆ ಮಾರುತ್ತಾರೆ.. ಅದೇ ರೀತಿ ಇನ್ನು ಏನೇನೊ ಬಳಸಿ ಹಾಲು ಮೊದಲಿನ ಗಿನವನ್ನೇ ಉಳಿಸಿಕೊಳ್ಳುವಂತೆ ಮಾಡುತ್ತಾರೆ ಅಂತ.. ಬೇರ್ಪಡಿಸಿದ ಕೊಬ್ಬಿನಿಂದ ಇತರೆ ಉಪ ಉತ್ಪನ್ನಗಳನ್ನ ಮಾಡಿ ಮಾರಾಟ ಮಾಡುತ್ತಾರೆ.. ಇದರಿಂದ ಸಂಸ್ತೆಗೆ ಒಳ್ಳೆ ಲಾಭ ಬರುತ್ತದೆ ಎಂದು..ಹಾಗೆಯೇ ಹೊರಟೆ..ನಾವು ಕೊಟ್ಟ ಹಣ ಎಷ್ಟು ಜನರ ಹೊಟ್ಟೆ  ತುಂಬಿಸುತ್ತದೆ..? ಹಾಲಿನವನು ಮತ್ತು ಅವನ ಸಂಸಾರ, ಹುಲ್ಲುಮಾರುವವನು ಮತ್ತು ಅವನ ಸಂಸಾರ, ಗಾಡಿಯವನು  ಮತ್ತು ಅವನ ಸಂಸಾರ, ಹಾಲು ದೈರಿಯವರು ಮತ್ತು ಅವರ  ಸಂಸಾರ,  ನಂದಿನಿ heritage ಗಳಲ್ಲಿ ಕೆಲಸಮಾಡುವ ಸಹಸ್ರಾರು ಜನ ಉದರಪೋಷಣೆ, ಇನ್ನು ಸ್ವಲ್ಪ ಮುಂದುವರೆದರೆ, ಅವರು ಆ ಹಣವನ್ನ ಪುನಃ ಯಾವುದೋ ಸಾಮಾನು ಖರೀದಿಗೋ ಉಪಯೋಗಿಸಿ ಅಲ್ಲಿಂದ ಸುತ್ತು ಹಾಕಿ ಪುನಃ ಇನ್ನೊಬ್ಬ ರೈತನ ಸಂಸಾರ ನಡೆಯುತ್ತದೆ.. ಒಂದು ಸಲ ಯೋಚನೆ ಮಾಡಿದರೆ ಇವೆಲ್ಲ ಹೇಗೆ ಸಾಧ್ಯ ಅನ್ನಿಸುತ್ತೆ.. ಹಣ  ಹೇಗೆಲ್ಲ ತಿರುಗುತ್ತದೆ ಎಂಬುದೇ ಸೋಜಿಗ.. ಹಾಗೆಯೇ ಇದು ನಮ್ಮ ಪರಿವೆಯೂ ಇಲ್ಲದೆ ನಡೆಯುತ್ತಿರುತ್ತದೆ ಎಂಬುದು ಇನ್ನು ವಿಸ್ಮಯ ..


ಇದೇ ರೀತಿ ನಾವು ವ್ಯಯಿಸುವ ಪ್ರತಿಯೊಂದಕ್ಕೂ ಇದೇರೀತಿ ಸಂಬಂದ ಸಿಗುತ್ತದೆ.. ಹಣ ಅಥವಾ ಲಕ್ಷ್ಮಿ ಯಾವುದೇ ಕಾರಣಕ್ಕೂ ಒಬ್ಬರ ಆಸ್ತಿಯಾಗಿರಲು ಬಯಸುವುದಿಲ್ಲ .. ಒಂದು  ಚಕ್ರವನ್ನ ಗಮನಿಸಿದರೆ ಲಕ್ಷ್ಮಿ ಹಲವು ವರ್ಗದವರ ಮನೆಗೆ ಭೇಟಿ ನೀಡುವುದನ್ನ  ಕಾಣುತ್ತೇವೆ.. 

ನಮಗೆ ಇನ್ನು ಒಂದು ವಿಚಿತ್ರ ಅಂದ್ರೆ, ನೀವು ಹಲವಾರು ಕಡೆ ಓಡಾಡುತ್ತಿರಿತ್ತಿರ.. ಹೋದಲ್ಲಿ ಬಂದಲ್ಲಿ ಹಲವಾರು ಕಂಪನಿ ಗಳ ಜಾಹೀರಾತು,  ಅವುಗಳ ಉತ್ಪನ್ನಗಳನ್ನ ನೋಡುತ್ತಿರ..ಇದರಿಂದ ನಾವೇನು ಕಳಕೊಳ್ಳುವುದು ಎಂದು ಯೋಚಿಸಬೇಡಿ.. ನೀವು ಅದೇ ಚಿತ್ರವನ್ನ ಹಲವಾರು ಬಾರಿ ನೋಡಿದಾಗ ಅದು ನಿಮ್ಮ ಮನದಲ್ಲಿ ಅಚ್ಚುಒತ್ತಿ ಉಳಿಯುತ್ತದೆ.. ನಿಮ್ಮ ಜೀವನದಲ್ಲಿ ಅಂತಹದ್ದೇ ಒಂದು ವಸ್ತು ಯಾವಾಗಲಾದರು ಬೇಕಾಗಬಹುದು.. ಅದನ್ನ ಖರೀದಿಗೆ  ನೀವು ಅಂಗಡಿಗೆ ಹೋಗುತ್ತಿರ.. ಆಗ ಅಲ್ಲ್ಲಿ ನಿಮಗೆ ನಿಮಗೆ ಹಲಾವು ಕಂಪನಿ ಗಳ ವಸ್ತು ಕಾಣಬಹುದು ಆದ್ರೆ ನೀ ವು ಖರೀದಿಸುವ ಸಾಧ್ಯತೆ ಇರುವುದು ನೀವು ದಿನಾ ನೋಡುತ್ತಿರುವ ಜಾಹಿರಾತಿನ ಕಾಮಪ್ನಿಯ ವಸ್ತು.. ಆ ಜಾಹಿರಾತಿನ ನೆನಪಾಗಿ ಆ ವಸ್ತುವನ್ನು ಕೊಂಡರೆ ಆ ಜಾಹೀರಾತು ಹಾಕಿದವನ ಶಾಮಕ್ಕೆ  ಪ್ರತಿಫಲ ಸಿಕ್ಕಂತೆ.. ಅದರಿಂದ ಅದರ ಲಾಭ ಅದರ ಮಾರಾಟಗಾರರು ಜಾಹೀರಾತುದಾರರು, ಕಂಪನಿ, ನೌಕರರು.. ಕೊನೆಗೆ ಆ ಕಚ್ಚಾ ವಸ್ತು ಬೆಳೆದ ರೈತ ಹೀಗೆ ಸಾಗುತ್ತದೆ.. ಇದರಿಂದ ಒಬ್ಬ ಒಂದು ಚಿತ್ರ ನೋಡಿದ ಮಾತ್ರಕ್ಕೆ ಅವನು ಅವನ ಹತ್ತಿರ ಇದ್ದ ಹಣವನ್ನ ಎಲ್ಲಿ ದುಡಿಯುತ್ತಿದ್ದ ರೈತನಿಗೆ ಅದು ತಲುಪುವಂತೆ ಮಾಡುತ್ತೇನೆ ಅನ್ನುವ ಕಲ್ಪನೆ ಕೂಡ ಬರಲು ಅಸಾಧ್ಯ..      


ಇಲ್ಲಿ ಒಂದನ್ನ ನಾವು ಗಮನಿಸಬೇಕು... ಹೆಚ್ಚಿನ ಎಲ್ಲ ಚಲನೆಯಲ್ಲೂ ರೈತನ ಪಾತ್ರ ಇರುವುದನ್ನ ನೋಡುತ್ತೇವೆ.. ಆದರೂ ನಮ್ಮ ರೈತರ ಬದುಕು ಯಾಕೆ ಹೀಗೆ ಆಗುತ್ತಿವೆ..? 
ಇದರಲ್ಲಿ ಹಲವರು ನ್ಯಾಯಸಮ್ಮತವಾಗಿ ವ್ಯವಹರಿಸಿದರೆ ಕೆಲವರು ಅಡ್ಡದಾರಿ ಹಿಡಿಯುತ್ತಾರೆ.. ಬಲು ಬೇಗ ಶ್ರೀಮಂತರಾಗುವ ದುರಾಸೆ ಅವರಲ್ಲಿ ಇರುತ್ತದೆ.. ಯಾರು ಏನೆ ಸಂಪಾದಿಸಿದರೂ ಅದು ಯಾವುದೋ ಒಂದು ರೂಪದಲ್ಲಿ ಬೇರೆಯವರ ಕೈ ಸೇರಲೇ ಬೇಕು ಅಲ್ವ..?